ಸಹ್ಯಾದ್ರಿ ಸಾಲಿನಲಿ ಮಲೆನಾಡ ಕಾಡಿನಲಿ ಬೆಳೆದಿತ್ತು ಭಾರಿ ಆಲದ
ಮರವು ಮೊರದಿತ್ತು ನೂರಾರು ಹಕ್ಕಿಗಳ ಸ್ವರವು
ಕಿ ಕಿ ಕಿ ಕಿ ಎನ್ನುತ ಹಾಡೋಣ
ತೂಗಿ ಸಾಗಿ ಎಲ್ಲರು ಹಾರೋಣ
ಸಿಹಿಯಾದ ರುಚಿಯಾದ ಹಣ್ಣಿನ ರಸವ ಹೀರೋಣ
ಕಿ ಕಿ ಕಿ ಕಿ ಎನ್ನುತ ಹಾಡೋಣ
ಕಲಕಲ ಕುಣಿಯೋಣ
ಮೈ ಮನ ಮರೆಯೋಣ
ಒಟ್ಟಿಗೆ ಸಾಗಿ ಮೆತ್ತಗೆ ಹೋಗಿ ಇಂದೆ ಮೆರೆಯೋಣ
ಕಿ ಕಿ ಕಿ ಕಿ ಎನ್ನುತ ಹಾಡೋಣ
ತೂಗಿ ಬಾಗಿ ಎಲ್ಲರು ಹಾಡೋಣ
ಎಲ್ಲರು ಹಾಡೋಣ
ಎಲ್ಲರು ಹಾಡೋಣ
ಕಂದ ನೀ ಬಲಿಯಾದೆಯ ತಂದೆ ತಾಯಿಯ ತೊರೆದೆಯ
ಕಾಡಿತೆ ವಿಷವು ತೀರಿತೆ ಋಣವು
ಕಾಳ ಸರ್ಪದ ಕಾಗು ತಾಳಾಲಾರ ನೋವು
ಇದಕೆ ಕೊನೆ ಇಲ್ಲವೆ
ಯಾರು ಗತಿ ಇಲ್ಲವೆ
ಇಲ್ಲವೆ
ಇಲ್ಲವೆ
ಕಂದ ನೀ ಬಲಿಯಾದೆಯ ತಂದೆ ತಾಯಿಯ ತೊರೆದೆಯ
ಅಗಲಿ ಇರಲಾರೆ ನಾ ಅಗಲಿ ಇರಲಾರೆ ಇರಲಾರೆ
ಏನಾಯ್ತು ಹೇಗಾಯ್ತು ಯಾರಿಂದ ಹೇಳಿ ಹೇಳಿ
ಅಳಬೇಡಿ ಹೆದರಬೇಡಿ ಈ ನರಿ ಮಾತು ಕೇಳಿ
ಅಪಾಯ ಬಂದಾಗ ಉಪಾಯ ಹೇಳ್ತೀನಿ
ಆ ಸರ್ಪಾನೆ ಸಾಯೊ ಹಾಗ್ ಮಾಡ್ತೀನಿ
ಬನ್ನಿ ಎಲ್ಲ ಬನ್ನಿ
ಏ ಪಕ್ಷಿ ರಾಜ ಬಾನ ತೇಜ ಬಾ ಬಾ
ಆಹಾ ಆಹಾ ಏನು ರೋಷ ಏನೋ ಆವೇಶ ಎಲ್ಲ ನಮ್ಮಂಥ ಬಡ ಪ್ರಾಣಿಗಳ ಮೇಲೇನೆ ನಿನ್ನ ಪೌರುಷ
ಸಾಕು ಸಾಕು ಬರಿ ಒಣ ಜಂಬದಿಂದ ಏನು ಪ್ರಯೋಜನವಿಲ್ಲ
ವೃತ ಕೋಪ ತಾಪ ಪ್ರತಾಪ ಏನು ಸುಖವಿಲ್ಲ
ನಮ್ಮ ಸರ್ಪ ರಾಜನ ಮುಂದೆ ನಿನ್ನ ದರ್ಪ ಏನು ನಡೆಯೊಲ್ಲ
ತಾಳು ತಾಳು ನಿನ್ನ ಪೌರುಷ ಆವೇಶ ರೋಷ ಅಲ್ಲಿ ತೊರ್ಸು ಬಾ
ಅಪಾಯ ಬಂದಾಗ ಉಪಾಯದಿಂದ ಕಾರ್ಯ ಸಾಧಿಸಬೇಕು
ವೈರಿ ಎದುರಾದಾಗ ಧೈರ್ಯ ತೋರಿ ಛಲದಿಂದ ಗೆಲ್ಲಬೇಕು
ಕಿ ಕಿ ಕಿ ಕಿ ಎನುತ ಹಾಡೋಣ
ತೂಗಿ ಬಾಗಿ ಎಲ್ಲರು ಹಾಡೋಣ
ಎಲ್ಲರು ಹಾಡೋಣ
ಎಲ್ಲರು ಹಾಡೋಣ....
ಈ ಹಾಡು ನನ್ನ ಆದಿತ್ಯಗೆ ತುಂಬ ಇಷ್ಟ
ಈ ಹಾಡು ಬಂದಾಗೆಲ್ಲ ಕೀ ಕೀ ಎಂದು ಎದ್ದು ಕುಣಿಯುತ್ತಾನೆ
ಈ ಹಾಡು ನೋಡಲು ಅಷ್ಟೆ ತುಂಬ ಚೆನ್ನಾಗಿದೆ
Wednesday, March 24, 2010
ಈ ಹಾಡು ನನ್ನ ಆದಿತ್ಯಗೆ ಪಂಚಪ್ರಾಣ
Posted by Unknown at 12:49 PM 0 comments
Tuesday, March 9, 2010
Subscribe to:
Comments (Atom)